ಮುನಿರಾಬಾದಿನ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದಿಂದ ಬಳ್ಳಾರಿಯ RYMECಯಲ್ಲಿ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ


 ಮುನಿರಾಬಾದಿನ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದಿಂದ ಬಳ್ಳಾರಿಯ RYMECಯಲ್ಲಿ 'ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನಾಚರಣೆ '



ಬಳ್ಳಾರಿ, 13 ಡಿಸೆಂಬರ್ 2023

ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು ಮತ್ತು  ಮುನಿರಾಬಾದಿನ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಕೇಂದ್ರದ ಜಂಟಿ ಆಯೋಜನೆಯಲ್ಲಿ ೧೪ ಡಿಸೆಂಬರ್, ಗುರುವಾರದಂದು ಕಾಲೇಜಿನಲ್ಲಿ ಬೆಳಗ್ಗೆ 9 ಗಂಟೆಗೆ 'ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ'ವನ್ನು ಆಚರಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಶ್ರೀ ಶಾದಾಬ್ ಖಾನ್, ಮ್ಯಾನೇಜರ್, ಆಪರೇಷನ್ಸ್ ಡಿಪಾರ್ಟ್ಮೆಂಟ್, JSW ಎನರ್ಜಿ ಲಿಮಿಟೆಡ್, ತೋರಣಗಲ್ಲು, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಪ್ರಮುಖ ಸ್ಪೀಕರ್‌ಗಳು: ಡಾ.ಎಸ್.ಎಂ. ಶಶಿಧರ್, ಅಧ್ಯಕ್ಷರು, ಐಇ(ಐ), ಮುನಿರಾಬಾದ್, ಡಾ.ಪಿ.ಶರತ್ ಕುಮಾರ್, ಗೌರವ ಕಾರ್ಯದರ್ಶಿ, ಐಇ(ಐ), ಮುನಿರಾಬಾದ್, ಡಾ.ಟಿ.ಹನುಮಂತ ರೆಡ್ಡಿ, ಪ್ರಾಂಶುಪಾಲರು, ಆರ್‌ವೈಎಂಇಸಿ ಮತ್ತು ಡಾ. ಸವಿತಾ ಸೋನೋಲಿ (ಉಪ-ಪ್ರಾಂಶುಪಾಲರು ಮತ್ತು HOD-E&CE), ಮೆಕ್ಯಾನಿಕಲ್ ಮುಖ್ಯಸ್ಥರಾದ ಡಾ. ಕೋರಿ ನಾಗರಾಜ್.

ಸಮಾರಂಭದಲ್ಲಿ ಉಪಸ್ಥಿತರಿರುವ ಗಣ್ಯರು:ಶ್ರೀ ಅಲ್ಲಂ ಚನ್ನಪ್ಪ, ಉಪಾಧ್ಯಕ್ಷರು, ವಿ ವಿ ಸಂಘ, ಮತ್ತು ಆಡಳಿತ ಮಂಡಳಿಯ ಸದಸ್ಯರು ಸಹ ಭಾಗವಹಿಸಲಿದ್ದಾರೆ.

 ಈ ಕಾರ್ಯಕ್ರಮದ ಆಯೋಜನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಹಾಗೂ ಪೇಂಟಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಡಾ. ಚಂದ್ರಗೌಡ ಎಂ, ಐಇ(ಐ) ಕಾರ್ಯಕಾರಿ ಸಮಿತಿ ಸದಸ್ಯರು, ಡಾ. ವೀರಭದ್ರಪ್ಪ ಆಲಗೂರ್ ಮತ್ತು ಪ್ರೊ. ದೀಪಕ್ ಸಿ, ಐಇ(ಐ) ಸದಸ್ಯರು ಅವರು ಕಾರ್ಯಕ್ರಮದ ಸಂಚಾಲಕರಾಗಿದ್ದಾರೆ.

Comments

Popular posts from this blog

STEM Workshop held at PM SHRI Kendriya Vidyalaya, Hosapete

“Big Goals, Big Achievements” -Swami Sri Nirbhayananda Saraswati